ನರೇಂದ್ರ ಪದವಿ ಪೂರ್ವ ಕಾಲೇಜು: ಕಟ್ಟಡದ ಭೂಮಿಪೂಜಾ ಹಾಗೂ ಶಿಲಾನ್ಯಾಸ ಕಾರ್ಯಕ್ರಮ

ನರೇಂದ್ರ ಪದವಿ ಪೂರ್ವ ಕಾಲೇಜು ಪುತ್ತೂರು ಇದರ ಉದ್ದೇಶಿತ ಕಟ್ಟಡದ ಭೂಮಿಪೂಜಾ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ದಿನಾಂಕ 17/02/2018 ಬೆಳಗ್ಗೆ ಸಮಯ 8.30 ಕ್ಕೆ ನಡೆಯಿತು. ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಶ್ರೀ ಅನಂತಕುಮಾರ್ ಹೆಗಡೆ, ಕೌಶಲ್ಯ ಅಭಿವೃದ್ಧಿ ಹಾಗೂ ವಾಣಿಜ್ಯೋದ್ಯಮ ಸಚಿವರು ಭಾರತ ಸರಕಾರ. ತದ ನಂತರ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವು ಜರುಗಿತು. ಸಭೆಯ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ದ ಅಧ್ಯಕ್ಷರಾಗಿರುವ ಶ್ರೀಯುತ ಡಾ| ಪ್ರಭಾಕರ ಭಟ್ ವಹಿಸಿದ್ದರು. […]