ಶತಮಾನೋತ್ಸವ – ವಿವೇಕಾನಂದ ಜಯಂತಿ ಆಚರಣೆ ಪತ್ರಿಕಾಗೋಷ್ಠಿ 8-1-2016

1900 ನೇ ಇಸವಿಯ ಹೊತ್ತಿಗೆ ಶಿಕ್ಷಣದ ಮಹತ್ವವನ್ನರಿತ ಅನೇಕ ಮಂದಿ ಶೈಕ್ಷಣಿಕ ರಂಗವನ್ನು ಪ್ರವೇಶಿಸಿದ್ದು, ಹತ್ತು ಹಲವು ಸ್ಥಳೀಯ ಶಾಲೆಗಳನ್ನು ಆರಂಭಿಸಿದ್ದು, ಶಿಕ್ಷಣದ ಮೂಲಕವೇ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದು ಮನಗಂಡದ್ದೆಲ್ಲ ಇತಿಹಾಸದಲ್ಲಿ ಮಹತ್ವದ ದಾಖಲೆಯಾಗಿ ಲಭ್ಯವಾಗುತ್ತದೆ. ಹೀಗೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಹೊರಟವರಿಗೆ ಮಾರ್ಗದರ್ಶಿ ಸಂಸ್ಥೆಯಾಗಿ ಒಂದು ವಿದ್ಯಾಪ್ರಸಾರಕ ಕೇಂದ್ರವನ್ನು ಆರಂಭಿಸುವುದು ಅಗತ್ಯ ಎಂದು ಆ ಸಂದರ್ಭದಲ್ಲಿ ಅನೇಕ ಹಿರಿಯರು ಮನಗಂಡರು. ಇದರ ಪರಿಣಾಮವಾಗಿ 1915 ರ ಹೊತ್ತಿಗೆ ಪುತ್ತೂರು ಎಜುಕೇಶನ್ ಸೊಸೈಟಿ(ಈಗಿನ ವಿವೇಕಾನಂದ ವಿದ್ಯಾವರ್ಧಕ ಸಂಘ) ಅಸ್ಥಿತ್ವಕ್ಕೆ […]