• 08251 236599
  • 08251 236444
  • vvsputtur@gmail.com

ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಉಪ್ಪಿನಂಗಡಿ: ಹಿಂದೂ ಸೇವಾ ಪ್ರತಿಷ್ಠಾನ ಸಮಾಜದ ಬಡ ವಿದ್ಯಾರ್ಥಿಗಳಿಗೆ ಕೊಡ ಮಾಡಿದ ಪುಸ್ತಕಗಳನ್ನು ಉಪ್ಪಿನಂಗಡಿಯ ಶ್ರೀ ಮಾಧವ ಶಿಶು ಮಂದಿರದಲ್ಲಿ ವಿತರಿಸಲಾಯಿತು.

ಪುಸ್ತಕ ವಿತರಣೆಯನ್ನು ನೆರವೇರಿಸಿ ಮಾತನಾಡಿದ ,ಉಪ್ಪಿನಂಗಡಿ ಸಿ ಎ ಬ್ಯಾಂಕ್ ನಿರ್ದೇಶಕಯತೀಶ್ ಶೆಟ್ಟಿ ಸುವ್ಯ ಮಾತನಾಡಿಸತ್ ಪಾತ್ರರಿಗೆ ನೀಡುವದಾನ ಭಗವಂತನ ಪ್ರೀತಿಗೆ ಪಾತ್ರವಾಗುವುದಲ್ಲದೆ, ಭಗವಂತನದಯೆಯಿಂದ ಲಭಿಸಿದ ಸಂಪತ್ತು ಭಗವಂತನ ಸೇವೆಗೆ ವಿನಿಯೋಗವಾದ ಪುಣ್ಯ ಪ್ರಾಪ್ತವಾಗುವುದು . ಬಡ ವಿದ್ಯಾರ್ಥಿಗಳ ಅವಶ್ಯಕತೆಯನ್ನು ಮನಗಂಡು ಈ ಪರಿಸರದ ನೂರಾರು ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ವಿತರಿಸಲು ಮುಂದಾಗಿರುವ ಹಿಂದೂ ಸೇವಾ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವೆನಿಸಿದೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಶಿಶು ಮಂದಿರದ ಅಧ್ಯಕ್ಷ ಮನೋಜ್ ಶೆಟ್ಟಿ ರಾಜಾದಾದ್ಯಂತ ಬಡ ವಿದ್ಯಾರ್ಥಿಗಳ ಅವಶ್ಯಕತೆಯನ್ನು ಪೂರೈಸಲು ಶ್ರಮಿಸುತ್ತಿರುವ ಹಾಗೂ ಅನ್ಯಾನ್ಯ ವಿಭಾಗಗಳಲ್ಲಿ ಸೇವಾ ಕಾರ್ಯವನ್ನು ಕೈಗೊಂಡು ನೈಜ ರಾಷ್ಟ್ರ ಸೇವೆ ಸಲ್ಲಿಸುತ್ತಿರುವ ಹಿಂದೂ ಸೇವಾ ಪ್ರತಿಷ್ಠಾನದ ಕಾರ್ಯಆದರ್ಶ ಪ್ರಾಯವಾಗಿದೆ ಎಂದರು.

ಶಿಶುಮಂದಿರದ ಮಾತಾಜಿ ಪುಷ್ಪಲತಾ ಸ್ವಾಗತಿಸಿ, ಸಹಾಯಕಿಚಂದ್ರಾವತಿ ವಂದಿಸಿದರು.

Highslide for Wordpress Plugin